೨೦೧೧ ರ ಜನವರಿಯಲ್ಲಿ ದೇವಸ್ಥಾನಗಳಲ್ಲಾದ ಕಳ್ಳತನ !


ಕರ್ನಾಟಕ
ಜನವರಿ ೮ : ಹಿಂದೂದ್ವೇಷಿ ಕಳ್ಳರು ಕೆಂಜಾರು ಎಂಬಲ್ಲಿನ ಶ್ರೀರಾಮಾಂಜನೇಯ ದೇವಸ್ಥಾನಕ್ಕೆ ರಾತ್ರಿ ಸುಮಾರು ೨ ರಿಂದ ೩ ಗಂಟೆಗೆ ಬಂದು ಶ್ರೀರಾಮ, ಸೀತೆ, ಲಕ್ಷ್ಮಣ ಇವರ ಮುದ್ರೆಯಿರುವ ೫೪ ಬೆಳ್ಳಿಯ ನಾಣ್ಯಗಳು, ಚಿನ್ನದ ಒಂದು ಸರ, ಬೆಳ್ಳಿಯ ಒಂದು ಸರ, ಬೆಳ್ಳಿಯ ೪ ಕಡಗಗಳು, ಅರ್ಪಣೆ ಪೆಟ್ಟಿಗೆಯಲ್ಲಿನ ನೋಟುಗಳು ಮತ್ತು ಕಪಾಟಿನಲ್ಲಿದ್ದ ೫ ಸಾವಿರ ರೂಪಾಯಿಗಳನ್ನು ಅಪಹರಿಸಿದ್ದಾರೆ. ಅಲ್ಲದೇ ಗರ್ಭಗುಡಿಯಲ್ಲಿ ಮೂತ್ರ ವಿಸರ್ಜಿಸಿ ಗೋಪುರದ ಮೇಲೆ ಮಲ ವಿಸರ್ಜನೆ ಮಾಡಿದ್ದಾರೆ. ಈ ಘಟನೆಯ ಮಾರನೇ ದಿನ ಸಮೀಪದ ಬಜ್ಪೆಯಲ್ಲಿನ ವಿಜಯವಿಠ್ಠಲ ದೇವಸ್ಥಾನದಲ್ಲಿ ಹಿಂದೂ ದ್ವೇಷಿ ಕಳ್ಳರು ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸಿ ಬೆಳ್ಳಿಯ ಕಿರೀಟ, ಬೆಳ್ಳಿಯ ಗಣೇಶ ಮೂರ್ತಿ, ಚಿನ್ನದ ಮಂಗಲ ಸೂತ್ರ, ಕಿವಿಯ ಬೆಂಡೋಲೆ, ಬೆಳ್ಳಿಯ ದೀಪ ಮತ್ತು ಅರ್ಪಣೆ ಪೆಟ್ಟಿಗೆಯಲ್ಲಿರುವ ಹಣವನ್ನು ಅಪಹರಿಸಿದ್ದಾರೆ.
ಜನವರಿ ೯ : ಕುಂದಾಪುರ ತಾಲೂಕಿನ ಕಮಲಶಿಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತಡ ರಾತ್ರಿ ನುಗ್ಗಿದ ಕಳ್ಳರು ಸುಮಾರು ೨೦ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
೧೫ ಜನವರಿ : ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸುಪ್ರಸಿದ್ಧ ಕ್ಷೇತ್ರ ಕುಪ್ಪೂರು ಶ್ರೀ ಮರುಳ ಸಿದ್ಧೇಶ್ವರ ಮಠದ ದೇವಸ್ಥಾನದಲ್ಲಿ ೧೫ ಕೆ.ಜಿ. ಬೆಳ್ಳಿಯ ಆಭರಣ ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳರು ದೋಚಿದ್ದಾರೆ.
೨೭ ಜನವರಿ : ಶಿವಮೊಗ್ಗದ ಪ್ರಸಿದ್ಧ ಗುಡ್ಡೇಕಲ್ಲು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ೭ ಲಕ್ಷ ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿದೆ.
ಗೋವಾ
ಜನವರಿ ೯ : ಫಾತೋರ್ಡಾ, ಮಡಗಾಂವ್‌ನಲ್ಲಿನ ಶ್ರೀ ನಾಗದೇವತೆಯ ದೇವಸ್ಥಾನದ ಹುಂಡಿಯಲ್ಲಿನ ೧೫ ಸಾವಿರ ರೂಪಾಯಿಗಳನ್ನು ಕಳ್ಳತನ ಮಾಡಿದ್ದಾರೆ.
ಜನವರಿ ೯ : ಮಾಲಪೆ, ಪೆಡಣೆಯಲ್ಲಿನ ಶ್ರೀ ಮೂಳವೀರ ದೇವಸ್ಥಾನದ ಹುಂಡಿಯನ್ನು ಒಡೆದು ಕಳ್ಳರು ಸಾವಿರಾರು ರೂಪಾಯಿಗಳನ್ನು ದೋಚಿದ್ದಾರೆ.
ಜನವರಿ ೨೪ : ಮೆಣಕುರೆ, ಡಿಚೋಲಿಯಲ್ಲಿನ ಶ್ರೀ ಮಾವುಲಿ ದೇವಸ್ಥಾನದಲ್ಲಿ ಹುಂಡಿಯಿಂದ ೫ ಸಾವಿರ ರೂಪಾಯಿಗಿಂತ ಹೆಚ್ಚು ಹಣ ದೋಚಿದ್ದಾರೆ.

ಮಹಾರಾಷ್ಟ್ರ
೮ ಜನವರಿ : ಉಭಾದಾಂಡಾ, ವೆಂಗುರ್ಲೆ ಎಂಬಲ್ಲಿನ ಶ್ರೀ ವಾಟೋಬಾ ದೇವಸ್ಥಾನ ಹಾಗೂ ಮಠದಲ್ಲಿನ ಶ್ರೀ ಕಾಪಾದೇವಿ ದೇವಸ್ಥಾನದಲ್ಲಿನ ಹುಂಡಿ ಒಡೆದು ೪ ಸಾವಿರ ರೂಪಾಯಿ ಹಾಗೂ ೧,೨೦೦ ರೂಪಾಯಿಗಳನ್ನು ಕದ್ದಿದ್ದಾರೆ.
೯ ಜನವರಿ : ಮಾಳಶಿರಸ ಶ್ರೀಕ್ಷೇತ್ರ ವೀರ ಎಂಬಲ್ಲಿನ ಶ್ರೀ ಮಹಾಲಕ್ಷ್ಮಿ  ದೇವಸ್ಥಾನದಲ್ಲಿನ ೧ ಲಕ್ಷದ ೧೫ ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯನ್ನು ಕದ್ದಿದ್ದಾರೆ. ದೇವಸ್ಥಾನದ ೩ ಕಿಲೋ ೫೦೦ ಗ್ರಾಂ ತೂಕದ ಬೆಳ್ಳಿಯ ಪ್ರಭಾವಳಿಯನ್ನು ಕಳ್ಳರು ಕದ್ದಿದ್ದಾರೆ.
ಜನವರಿ ೧೬ : ಪುಣೆ ಜಿಲ್ಲೆಯ ಆಂಬೇಗಾವ ತಾಲೂಕಿನ ಶ್ರೀಕ್ಷೇತ್ರ ರಾಂಜಣಿಯಲ್ಲಿ ನರಸಿಂಹ ದೇವಸ್ಥಾನದ ನರಸಿಂಹನ ಮೂರ್ತಿಯನ್ನು ೨೩೧ ವರ್ಷಗಳಷ್ಟು ಹಳೆಯ ೫ ತೊಲೆ ತೂಕದ ಬಂಗಾರದ ಕಣ್ಣು ಮತ್ತು ದಾನಪೆಟ್ಟಿಗೆಯಲ್ಲಿನ ೧೦ ಸಾವಿರ ರೂಪಾಯಿ ದೋಚಿದ್ದಾರೆ.
೧೭ ಜನವರಿ : ನಾಸಿಕದ ಶ್ರೀ ಕಾಲಿಕಾದೇವಿ ದೇವಸ್ಥಾನದಲ್ಲಿ ಶ್ರೀ ಸರಸ್ವತಿ, ಶ್ರೀ ಲಕ್ಷ್ಮಿ, ಶ್ರೀ ಕಾಲಿಕಾದೇವಿ ಮೂರ್ತಿಗಳಿಗೆ ಹಾಕಿದ ವಜ್ರದ ಹಾರ ಮತ್ತು ಬೆಂಡೋಲೆಯ ಕಳ್ಳತನವಾಯಿತು.
೧೯ ಜನವರಿ : ಸಾವಂತವಾಡಿ ಬಸ್ ನಿಲ್ದಾಣದ ಬದಿಯಲ್ಲಿರುವ ದತ್ತ ದೇವಸ್ಥಾನದಲ್ಲಿ ಹಗಲಿನಲ್ಲಿ ಕಳ್ಳರು ಕಾಣಿಕೆ ಹುಂಡಿಯನ್ನು ಕದ್ದುಕೊಂಡು ಹೋಗಿದ್ದಾರೆ.
ಇತರ ರಾಜ್ಯ ಮತ್ತು ವಿದೇಶ
೧೧ ಜನವರಿ : ಭದೋಹಿ (ಉತ್ತರಪ್ರದೇಶ) ಎಂಬಲ್ಲಿನ ಗೋಪಾಲ ಗಂಜದಲ್ಲಿ ಸುಮಾರು ೨೦೦ ವರ್ಷಗಳಷ್ಟು ಹಿಂದಿನ ರಾಧಾಕೃಷ್ಣ ದೇವಸ್ಥಾನದಲ್ಲಿ ೧೦ ಇಂಚು ಎತ್ತರದ ಮತ್ತು ೮ ಕೆ.ಜಿ. ತೂಕದ ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಸುಮಾರು ೧೬ ಕೋಟಿಯಷ್ಟು ಬೆಲೆ ಬಾಳುವ ಅಷ್ಟಧಾತುವಿನ ಮೂರು ಮೂರ್ತಿಗಳನ್ನು ಕಳ್ಳತನ ಮಾಡಿದ್ದಾರೆ.
೯ ಜನವರಿ : ಢಾಕಾ ನಗರದಲ್ಲಿನ ಪ್ರಸಿದ್ಧ ಢಾಕೇಶ್ವರಿ ದೇವಸ್ಥಾನದಲ್ಲಿ ದೇವಿಯ ೨೦೦ ತೊಲೆಯ ಆಭರಣಗಳನ್ನು ದೋಚಲಾಗಿದೆ. ಬಂಗಾರ-ಬೆಳ್ಳಿಯ ಈ ಆಭರಣಗಳ ಬೆಲೆ ೧ ಕೋಟಿ ರೂಪಾಯಿಯಷ್ಟಿದೆ.

No comments:

Post a Comment