ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ವಿಶಾಖಪಟ್ಟಣಂನ ...

ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ವಿಶಾಖಪಟ್ಟಣಂನ (ಆಂಧ್ರಪ್ರದೇಶ) ಸನಾತನದ ಸಾಧಕ ಶ್ರೀ. ವಿಷ್ಣುದಾಸ ಕೀರ್ತನೆ
ದಕ್ಷಿಣ ಭಾರತ ಶಿಬಿರದಲ್ಲಿ ಸತ್ಕಾರ
ಶ್ರೀ. ವಿಷ್ಣುದಾಸ ಕೀರ್ತನೆಕಾಕಾರನ್ನು ಸತ್ಕರಿಸುತ್ತಿರುವ ಪೂ. ರಾಜೇಂದ್ರ ಶಿಂದೆ

ಮಂಗಳೂರು : ೨೭.೨.೨೦೧೧ ರಂದು ಮಂಗಳೂರಿನಲ್ಲಾದ ದಕ್ಷಿಣ ಭಾರತದ ಶಿಬಿರದಲ್ಲಿ ಸನಾತನದ ಸಂತ ಪೂ. ರಾಜೇಂದ್ರ ಶಿಂದೆಯವರು ಶೇ. ೬೧ ಆಧ್ಯಾತ್ಮಿಕ ಮಟ್ಟ ತಲುಪಿದ ವಿಶಾಖಪಟ್ಟಣಂನ ಸನಾತನದ ಸಾಧಕ ಶ್ರೀ. ಕೀರ್ತನೆಕಾಕಾರವರನ್ನು ಸತ್ಕರಿಸಿದರು. ಕೀರ್ತನೆಕಾಕಾ ವಿಶಾಖಪಟ್ಟಣಂನಲ್ಲಿ ಪ್ರಸಾರದ ಸೇವೆ ಮಾಡುತ್ತಿದ್ದಾರೆ.

ಈ ಸಮಯದಲ್ಲಿ ಶ್ರೀ. ಪ್ರಣವ ಮಣೇರಿಕರ ಹಾಗೂ ಶ್ರೀ. ವಿನಾಯಕ ಶಾನಭಾಗರವರೂ ಕೀರ್ತನೆ ಕಾಕಾರವರ ಗುಣವೈಶಿಷ್ಟ್ಯಗಳನ್ನು ತಿಳಿಸಿದರು. ಅಲ್ಲದೇ ಮಹಾಲೋಕದಿಂದ ಬಂದ ಕು. ಪ್ರಿಯಾಂಕಾ ಜೋಶಿ ಸೇರಿದಂತೆ ಗುಜರಾತ, ದೆಹಲಿ, ಮಹಾರಾಷ್ಟ್ರದ ಸಾಧಕರೂ ಈ ಕಾರ್ಯಕ್ರಮವನ್ನು ‘ಆನ್‌ಲೈನ್’ ಮುಖಾಂತರ ವೀಕ್ಷಿಸಿದರು.
ಈ ಸಮಯದಲ್ಲಿ ಕಾಕಾರವರು ಮಾತನಾಡುತ್ತಾ, ‘ಇದರಲ್ಲಿ ನನ್ನದು ಸ್ವಲ್ಪವೇ ಸಹ ಭಾಗವಿದೆ, ಪ.ಪೂ. ಗುರುದೇವರ ಹಾಗೂ ಶ್ರೀಕೃಷ್ಣನ ಸಹಭಾಗವೇ ಹೆಚ್ಚಿದೆ. ಗುರುಗಳ ಅಪೇಕ್ಷೆಯಂತೆ (ಶೇ. ೬೦ ಮಟ್ಟ ಆಗ ಬೇಕು) ಅವರು ೨ ಗುಣಗಳ (ಪ್ರೇಮಭಾವ ಮತ್ತು ಸಾಕ್ಷಿಭಾವ) ಆಧಾರದಲ್ಲಿ ಮಾಡಿಸಿಕೊಂಡರು. ಇದೆಲ್ಲ ಪ.ಪೂ. ಗುರುದೇವರ ಪ್ರೀತಿಯಿಂದಲೇ ಆಯಿತು’ ಎಂದರು.
ಈ ಸಮಯದಲ್ಲಿ ಪೂ. ರಾಜೇಂದ್ರ ಶಿಂದೆಯವರು ಮಾತನಾಡುತ್ತಾ, ‘ಕಾಕಾ ಸತತ ಉತ್ಸಾಹಿಯಾಗಿರುತ್ತಾರೆ. ಅವರು ಎಲ್ಲ ಸೇವೆಯನ್ನು ಮನಃಪೂರ್ವಕವಾಗಿ ಮಾಡುತ್ತಾರೆ. ಕೀರ್ತನೆಕಾಕಾ ಇದು ವರೆಗೆ ವಿಶಾಖಪಟ್ಟಣಂನ ಆಧಾರಸ್ತಂಭವಾಗಿದ್ದರು, ಈಗ ಇಡೀ ಆಂಧ್ರಪ್ರದೇಶದ ಆಧಾರಸ್ತಂಭವಾದರು’ ಎಂದರು.

No comments:

Post a Comment